ಶ್ರೀನಗರ: ಕಾಶ್ಮೀರ ಪ್ರತ್ಯೇಕತಾವಾದಿಗಳ ಪರವಾಗಿ ಮಾತನಾಡಿರುವ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಶನಿವಾರ ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ.
ಪುಲ್ವಾಮ ದಾಳಿ ಮತ್ತುವಿಶೇಷಾಧಿಕಾರ ಕಲಂ 35ಎ ವಿಚಾರಣೆ ಇರುವ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್ಎಫ್) ಅಧ್ಯಕ್ಷ ಯಾಸಿನ್ ಮಲ್ಲಿಕ್ ಅವರನ್ನು ಬಂಧಿಸಿರುವುದಕ್ಕೆ ಪಿಡಿಪಿ ನಾಯಕಿ ಖಂಡಿನೆ ವ್ಯಕ್ತಪಡಿಸಿದ್ದಾರೆ.
In the past 24 hours, Hurriyat leaders & workers of Jamaat organisation have been arrested. Fail to understand such an arbitrary move which will only precipitate matters in J&K. Under what legal grounds are their arrests justified? You can imprison a person but not his ideas.
ಕಾಶ್ಮೀರ ಪ್ರತ್ಯೇಕವಾದಿಗಳು ಮತ್ತು ಹುರಿಯತ್ ನಾಯಕರ ನಡುವೆ ಇತ್ತೀಚೆಗೆ ನಡೆದ ಗಲಭೆಯ ನಿದರ್ಶನ ನೀಡಿ ಮಾತನಾಡಿದ ಮುಫ್ತಿ, ‘ನೀವು ಒಬ್ಬ ವ್ಯಕ್ತಿಯನ್ನು ಬಂಧಿಸಬಹುದೇ ಹೊರತು ಅವರ ಆಲೋಚನೆಗಳನ್ನಲ್ಲಾ’ ಎಂದು ಹೇಳಿದ್ದಾರೆ.
‘ಕಳೆದ 24 ತಾಸಿನಲ್ಲಿ ಹುರಿಯತ್ ನಾಯಕರು ಮತ್ತು ಜಮಾತ್ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ನೀವು ಕಾನೂನಿನ ಯಾವ ನೆಲೆಯಲ್ಲಿ ಅವರನ್ನು ಬಂಧಿಸಿದ್ದೀರಿ? ಸ್ಪಷ್ಟನೆ ನೀಡಿ. ವ್ಯಕ್ತಿಯನ್ನು ಬಂಧಿಸಬಹುದು, ಅವರ ಯೋಚನೆಗಳನ್ನಲ್ಲಾ’ ಎಂದು ಟ್ವೀಟ್ ಮಾಡಿದ್ದಾರೆ.
ಐದು ಪ್ರತ್ಯೇಕವಾದಿಗಳಿಗೆ ನೀಡುತ್ತಿರುವ ಭದ್ರತೆಯನ್ನು ವಾಪಾಸ್ ಪಡೆಯುವುದಾಗಿ ಜಮ್ಮು ಮತ್ತು ಕಾಶ್ಮೀರ ಆಡಳಿತಕಳೆದ ವಾರವಷ್ಟೇ ಹೇಳಿತ್ತು.