ರಾಮೇಶ್ವರಂ: ಧನುಷ್ಕೋಟಿ ಸಮೀಪದ ಕಡಲ ತೀರದಲ್ಲಿ ಸ್ನಾನ ಮಾಡುವಾಗ ಮೊಬೈಲ್ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿಕರ್ನಾಟಕದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಸಮುದ್ರ ಪಾಲಾಗಿದ್ದಾನೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
ಕಡಲಿನಲ್ಲಿ ದೈತ್ಯ ಅಲೆಯೊಂದು ಏಳುವಾಗ ಸೆಲ್ಫಿ ತೆಗೆದುಕೊಳ್ಳಲು ಬರ್ಜ್ವೆಲ್ (18) ಮುಂದಾಗಿದ್ದಾನೆ. ಆಗ ಅಲೆಯು ಆತನನ್ನು ಆಳ ಸಮುದ್ರಕ್ಕೆ ಎಳೆದೊಯ್ದಿದೆ ಎಂದು ಅವನ ಸಹಪಾಠಿಗಳು ಹೇಳಿದ್ದಾರೆ.
ಕರಾವಳಿ ರಕ್ಷಣಾ ಪಡೆ ನಾಪತ್ತೆಯಾದ ಯುವಕನಿಗೆ ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.