ಎರಡು ತಿಂಗಳ ಹಿಂದಷ್ಟೇ ಪವನ್ ಕುಮಾರ್ ಜನನ ಪ್ರಮಾಣ ಪತ್ರಗಳಿಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಗ್ರಾಮ ಅಭಿವೃದ್ಧಿ ಅಧಿಕಾರಿ ಸುಶೀಲ್ ಚಂದ್ ಅಗ್ನಿಹೋತ್ರಿ ಮತ್ತು ಮುಖ್ಯಸ್ಥ ಪ್ರವೀಣ್ ಮಿಶ್ರಾ ಅವರು ಜನನ ಪ್ರಮಾಣ ಪತ್ರ ನೀಡಲು ತಲಾ ₹500 ಗಳನ್ನು ಬೇಡಿಕೆಯಿಟ್ಟಿದ್ದರು. ಲಂಚ ಕೊಡಲು ನಿರಾಕರಿಸಿದಾಗ 2016 ಮತ್ತು 2018ರ ಬದಲು ಜೂನ್ 13, 1916 ಮತ್ತು ಜನವರಿ 6, 1918 ಎಂದು ಪತ್ರದಲ್ಲಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.