ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಗೋದಗೇರಿ ಗ್ರಾಮದಿಂದ ಖಾನಾಪುರಕ್ಕೆ ಬರುತ್ತಿತ್ತು. ಆದರೆ, ಗೋದಗೇರಿ ರೈಲ್ವೆಗೇಟ್ ಬಳಿ, ಇದ್ದಕ್ಕಿದ್ದಂತೆಯೇ ಬಸ್ಸಿನ ಬ್ರೇಕ್ ಫೇಲ್ ಆಗಿದೆ. ಇದರಿಂದ, ಚಾಲಕ ಎಂ.ಎಸ್. ಗುಡಗುಡಿ ವಿಚಲಿತರಾಗಿದ್ದಾರೆ. ಅಷ್ಟರಲ್ಲೇ ಬಸ್ಸು ರೈಲ್ವೆಗೇಟ್ನತ್ತ ನುಗ್ಗಿದೆ. ಗೇಟ್ ಮುರಿದುಬಿದ್ದಾಗ ಬಸ್ ಹಳಿಯ ಮೇಲೆ ಬಂದು ನಿಂತಿದೆ.