ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಳ್ಗಿಚ್ಚು ತಡೆಯಲು ಹೊಗೆ ಪತ್ತೆ ಮಾಡುವ ಉಪಕರಣಗಳು ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗುವುದು. ಕಾಳ್ಗಿಚ್ಚಿನಿಂದ ಸ್ವಲ್ಪ ಪ್ರಮಾಣದಲ್ಲಿ ಅರಣ್ಯ ನಾಶವಾಗಿದೆ. ಆದರೆ, ಸಾಮಾಜಿಕ ತಾಣಗಳಲ್ಲಿ ಊಹಿಸಿದಷ್ಟು ಹಾನಿಯಾಗಿಲ್ಲ. ಮುಂಗಾರು ಆರಂಭವಾದ ನಂತರ ಪುನಃ ಕಾಡಿನಲ್ಲಿ ಹಸಿರು ಚಿಗುರಲಿದೆ’ ಎಂದು ಹೇಳಿದರು.