ಉಪಗ್ರಹಗಳ ನೆರವು: ಇದಕ್ಕೂ ಮೊದಲು ಗೋಕರ್ಣ ಸಮೀಪದ ಮಾದನಗೇರಿಯ ಮೀನುಗಾರ ಸತೀಶ ಈಶ್ವರ ಹರಿಕಂತ್ರ ಅವರ ಮನೆಗೆ ಸಚಿವರು ಭೇಟಿ ನೀಡಿದ್ದರು. ಅಲ್ಲಿ ಮಾತನಾಡಿದ ಅವರು, ‘ದೋಣಿ ಮತ್ತು ಮೀನುಗಾರರ ಪತ್ತೆಗೆ ಇಸ್ರೊ ಹಾಗೂ ಗೂಗಲ್ ನೆರವು ಕೋರಲಾಗಿದೆ. ಮೀನುಗಾರರು ನಾಪತ್ತೆಯಾದ ಬಗ್ಗೆ ದೂರು ಕೊಡಲು ತಡವಾಗಿದ್ದೇ ತನಿಖೆಗೆ ಹಿನ್ನಡೆಯಾಗಲು ಕಾರಣ. ಡಿ.15ರ ರಾತ್ರಿ ನಾಪತ್ತೆಯಾದರೆ 22ನೇ ತಾರೀಕಿಗೆ ದೂರು ನೀಡಲಾಗಿದೆ’ ಎಂದುಅಸಮಾಧಾನ ವ್ಯಕ್ತಪಡಿಸಿದರು.