ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಗಡಿ ಭಾಗದ ಹಳ್ಳಿಗಳಲ್ಲಿ ಹಾಗೂ ಗೋಕಾಕ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ. ಮುಂಗಾರು ಪೂರ್ವ ಮಳೆ ಬಾರದಿದ್ದರಿಂದ ಹಾಗೂ ಮಹಾರಾಷ್ಟ್ರ ಸರ್ಕಾರ, ಕೃಷ್ಣಾ ನದಿಗೆ ಕೊಯ್ನಾ ಜಲಾಶಯದಿಂದ ನೀರು ಹರಿಸದಿದ್ದರಿಂದ ಅಥಣಿ ತಾಲ್ಲೂಕಿನ ಬಾಡಿಗಿ, ಐಗಳಿ, ತೆಲಸಂಗ, ಕಕಮರಿ ಗ್ರಾಮಗಳಲ್ಲಿ 3–4 ತಿಂಗಳಿನಿಂದ ನೀರಿನ ಕೊರತೆ ಕಂಡುಬಂದಿದೆ.