ಬೆಂಗಳೂರು: ‘ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ₹7,000 ಕೋಟಿ ಸಿಆರ್ಎಫ್ ಅನುದಾನ ನೀಡಲು ಕೇಂದ್ರ ಸರ್ಕಾರದ ಈಗಿನ ನೀತಿಯ ಪ್ರಕಾರ 14 ವರ್ಷಗಳು ಬೇಕಾಗುತ್ತದೆ. ಹೀಗಾದರೆ ನಾವು ಯಾವ ಕೆಲಸ ಮಾಡಲು ಆಗುತ್ತೆ ಸ್ವಾಮಿ?’
ಲೋಕೋಪಯೋಗಿ ಸಚಿವ ರೇವಣ್ಣ, ಬಿಜೆಪಿ ಸದಸ್ಯರ ಮುಂದಿಟ್ಟ ಪ್ರಶ್ನೆ ಇದು. ‘ಕೇಂದ್ರದಿಂದ ರಸ್ತೆ ಅಭಿವೃದ್ಧಿಗೆ ಈ ಹಿಂದಿನಕ್ಕಿಂತ ಈಗ ಹೆಚ್ಚು ಹಣ ಬರುತ್ತಿದೆ’ ಎಂಬ ಗೋವಿಂದ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯಿಸಿದರು.
‘₹2,500 ಕೋಟಿ ಮೊತ್ತದ ಕಾಮಗಾರಿಗೆ ಕಾರ್ಯದ ಆದೇಶ ನೀಡಲಾಗಿದೆ. ಕೇಂದ್ರ ಸರ್ಕಾರ ಪ್ರತಿವರ್ಷ ಬಿಡುಗಡೆ ಮಾಡುವುದು ಬರೀ ₹ 500 ಕೋಟಿ ’ ಎಂದು ರೇವಣ್ಣ ಹೇಳಿದರು.