ಮಾಲೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಲ್ಲಿನ ಮಾರುತಿ ಬಡಾವಣೆಯಲ್ಲಿ ಭಾನುವಾರ ಗ್ರಾಮೀಣ ಸಾಂಸ್ಕೃತಿಕ ವೇದಿಕೆಯು ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ‘ರಾಗಿ ಮುದ್ದೆ ತಿನ್ನುವ ಸ್ಪರ್ಧೆ’ಯಲ್ಲಿ ದೊಡ್ಡ ಕಡತೂರು ಗ್ರಾಮದ 60 ವರ್ಷದ ರೈತ ಗುರಪ್ಪಶೆಟ್ಟಿ ಅರ್ಧ ಗಂಟೆಯಲ್ಲಿ ಕೋಳಿ ಸಾರಿನೊಂದಿಗೆ 16 ಮುದ್ದೆ ತಿಂದು ಪ್ರಥಮ ಸ್ಥಾನ ಪಡೆದರು. ಅವರಿಗೆ ₹ 15 ಸಾವಿರ ನಗದು ಮತ್ತು ಟ್ರೋಫಿ ನೀಡಲಾಯಿತು.