ಬೆಂಗಳೂರು: ನಿತಿನ್ ಸಿದ್ದ ಅವರ ಎರಡು ಗೋಲುಗಳ ಬಲದಿಂದ ಮೈಸೂರು ಜಿಲ್ಲೆ ತಂಡ ಮಂಡ್ಯದಲ್ಲಿ ನಡೆದ ಕೆಎಸ್ಎಫ್ಎ ವತಿಯ ಅಂತರ ಜಿಲ್ಲೆಗಳ ಫುಟ್ಬಾಲ್ ಟೂರ್ನಿಯಲ್ಲಿ ಜಯಭೇರಿ ದಾಖಲಿಸಿದೆ.
ಗುರುವಾರದ ಪಂದ್ಯದಲ್ಲಿ ಮೈಸೂರು ತಂಡ 2–0 ಗೋಲುಗಳಲ್ಲಿ ಮಂಡ್ಯ ಜಿಲ್ಲೆ ತಂಡಕ್ಕೆ ಸೋಲುಣಿಸಿದೆ. ನಿತಿನ್ ಸಿದ್ದ (48, 58ನೇ ನಿ.) ಎರಡು ಗೋಲುಗಳನ್ನು ತಂದಿತ್ತರು.
ದಿನದ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ 2–0 ಗೋಲುಗಳಲ್ಲಿ ಕೋಲಾರ ಜಿಲ್ಲೆ ಎದುರು ಗೆದ್ದಿದೆ. ವಿಜಯೀ ತಂಡದ ವಸೀಂ (16ನೇ ನಿ.) ಹಾಗೂ ವಿನು (45ನೇ ನಿ.) ತಲಾ ಒಂದು ಗೋಲು ತಂದಿತ್ತರು.