ಕುಶಾಲನಗರ: ಮಾದಾಪಟ್ಟಣ ಸರ್ಕಾರಿ ಎಂಜಿನಿಯರ್ ಕಾಲೇಜು ಬಳಿಯ ಕಾವೇರಿ ನದಿಯಲ್ಲಿ ಬುಧವಾರ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ.
ಮಡಿಕೇರಿ ಉಕ್ಕುಡದ ನಿವಾಸಿ ರಮೇಶ್ ಪುತ್ರ ಆಕಾಶ್ (20), ಮ್ಯಾನ್ಸ್ ಕಾಂಪೌಂಡ್ ನಿವಾಸಿ ಚೆಲುವರಾಜು ಪುತ್ರ ಗಗನ್ (19) ಹಾಗೂ ಮೇಕೇರಿ ನಿವಾಸಿ ಉಮೇಶ್ ಅವರ ಪುತ್ರ ಶಶಾಂಕ್ (21) ಮೃತಪಟ್ಟವರು.