ಸಾಂಸಾರಿಕ ಹಾಗೂ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೃಷಿ ಕೈ ಸಾಲ ಪಡೆದಿದ್ದು, ಅದು ಸಹ ಕೃಷಿ ಉದ್ದೇಶಕ್ಕೆ ಅಲ್ಲ. ಬ್ಯಾಂಕ್ ಸಾಲ ಅಲ್ಲದ ಕಾರಣಕ್ಕೆ ಅರ್ಜಿ ತಿರಸ್ಕರಿಸಲಾಗಿದೆ. ಕೃಷಿಕ ತನ್ನ ಸಾವಿಗೆ ತಾನೇ ಕಾರಣ ಎಂದು ತಿಳಿಸಿದ್ದಾರೆ. ಸಾವಿಗೆ ಬೆಳೆ ಹಾನಿ ಕಾರಣ ಅಲ್ಲ. ಈ ರೈತನ ಸಾಲ ಚಾಲ್ತಿ ಸಾಲವಾಗಿದ್ದು, ಇದು ಬೆಳೆ ಸಾಲ ಮನ್ನಾ ವ್ಯಾಪ್ತಿಗೆ ಒಳಪಟ್ಟಿದೆ. ಇವರಿಗೆ ಬ್ಯಾಂಕಿನಿಂದ ಯಾವುದೇ ನೋಟಿಸ್ ಬಂದಿಲ್ಲ. ಮೃತರು ವೈಯಕ್ತಿಕ ಕಾರಣದಿಂದ ಮಾನಸಿಕ ಅಸ್ವಸ್ಥರಾಗಿ ಜೀವನದಲ್ಲಿ ಜಿಗುಪ್ಸೆಗೆ ಒಳಗಾಗಿ ಸಾವಿಗೆ ಶರಣಾಗಿದ್ದಾರೆ... ಹೀಗೆಂದು ಕೆಲವು ಪ್ರಕರಣಗಳಲ್ಲಿ ಕಾರಣಗಳನ್ನು ಉಲ್ಲೇಖಿಸಲಾಗಿದೆ.