ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆಗೆ ಕಾರು: ಐವರು ಸಾವು

ಅಂತ್ಯಕ್ರಿಯೆಗೆ ತೆರಳುತ್ತಿದ್ದಾಗ ಘಟನೆ
Last Updated 15 ಜನವರಿ 2019, 18:50 IST
ಅಕ್ಷರ ಗಾತ್ರ

ಬೆಳಗಾವಿ: ಸವದತ್ತಿ ತಾಲ್ಲೂಕು ಶಿವಾಪುರ ಬಳಿಯ ಗೋಕಾಕ- ಯರಗಟ್ಟಿ ಹೆದ್ದಾರಿ ಬದಿಯಲ್ಲಿರುವ ಘಟಪ್ರಭಾ ಎಡದಂಡೆ ನಾಲೆಗೆ ಸೋಮವಾರತಡ ರಾತ್ರಿ ಕಾರು ಬಿದ್ದು, ಅದರಲ್ಲಿದ್ದ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.

ಗೋಕಾಕ ಪಟ್ಟಣದ ಪಾರವ್ವ ಪೂಜೇರಿ (45), ಲಗಮಣ್ಣ ಪೂಜೇರಿ (38), ಪಕ್ಕೀರವ್ವ ಪೂಜೇರಿ (29), ಹನುಮಂತ ಪೂಜೇರಿ (60) ಹಾಗೂ ಲಕ್ಷ್ಮಿ ಪೂಜೇರಿ (40) ಮೃತರು. ಚಾಲಕ ಅಡಿವೆಪ್ಪ ಮಾಳಗಿ ಈಜಿ ದಡ ಸೇರಿದ್ದಾರೆ. ಇವರೆಲ್ಲರೂ ಕಡಬಿ ಗ್ರಾಮದಲ್ಲಿ ನಿಧನರಾಗಿದ್ದ ಅವರ ಸಂಬಂಧಿ ಲಕ್ಷ್ಮಣ ಮಲ್ಲಪ್ಪ ಕುಂಟಿರಪ್ಪಗೋಳ ಅವರ ಅಂತಿಮ ದರ್ಶನ ಪಡೆಯಲು ತೆರಳುವಾಗ ಘಟನೆ ನಡೆದಿದೆ.

‘ರಾಜ್ಯ ವಿಪತ್ತು ದಳ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಕ್ರೇನ್‌ ಬಳಸಿ ಕಾರನ್ನು ಹೊರ ತೆಗೆದರು. ಹನುಮಂತ ಅವರ ಮೃತದೇಹ ಪತ್ತೆಗೆ ಅಗ್ನಿಶಾಮಕ ಸಿಬ್ಬಂದಿ ಬೋಟ್‌ನಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ’ ಎಂದು ಎಸ್ಪಿ ಸುಧೀರ್‌ಕುಮಾರ್‌ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT