ಮೃತನ ಹೆಸರಿನಲ್ಲಿ ಸಾಲ ಇಲ್ಲ, ಮದ್ಯ ವ್ಯಸನಿ, ವೈಯಕ್ತಿಕ ಕಾರಣ, ಕೃಷಿ ಸಂಬಂಧಿಸಿದ ಸಾಲ ಇರಲಿಲ್ಲ, ಮಾನಸಿಕ ಖಿನ್ನತೆ, ಹೃದಯಾಘಾತ ಮತ್ತಿತರ ಕಾರಣಗಳಿಂದ ಸಾವು ಸಂಭವಿಸಿದೆ ಎಂದು ದೃಢಪಟ್ಟ ಕಾರಣಕ್ಕೆ 72 ಪ್ರಕರಣಗಳನ್ನು ಸಮಿತಿ ತಿರಸ್ಕರಿಸಿದೆ. ದಾಖಲಾತಿ ಸಿಗದ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಾರದೇ ಇರುವುದರಿಂದ 78 ಪ್ರಕರಣಗಳು ಅರ್ಹವೇ ಎಂದು ತೀರ್ಮಾನಿಸಲು ಬಾಕಿ ಇವೆ. ಅರ್ಹ ಎಂದು ಗುರುತಿಸಿದವುಗಳಲ್ಲಿ 192 ಪ್ರಕರಣಗಳಲ್ಲಿ ಮೃತನ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ವಿತರಿಸಲಾಗಿದೆ. 35 ಪ್ರಕರಣಗಳಿಗೆ ಪರಿಹಾರಧನ ವಿತರಿಸಲು ಬಾಕಿ ಇದೆ.