‘ಇದು, ತಾಲ್ಲೂಕಿನ ಶಿರವಾಡದ ದಿಲೀಪ್ ನಾಯ್ಕ ಎನ್ನುವವರಿಗೆ ಸೇರಿದ್ದು ಎನ್ನಲಾಗಿದೆ. ಜತೆಗೆ, ಅಮದಳ್ಳಿಯ ವಿಷ್ಣು ತಳೇಕರ್, ಚೆಂಡಿಯಾದ ಸುನೀಲ್ ಪಡ್ತಿ ಕೂಡ ಇದರಲ್ಲಿ ಆರೋಪಿತರಾಗಿದ್ದಾರೆ. ಮದ್ಯ ದಾಸ್ತಾನು ಮಾಡಿಕೊಂಡಿದ್ದ ಮನೆಯ ಮಾಲೀಕ ಅಮದಳ್ಳಿಯ ಸೀತಾರಾಮ್ ಚಿಂಚಣಕರ್ ಸೇರಿದಂತೆ ನಾಲ್ವರೂ ಕಣ್ಮರೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ’ ಎಂದು ಅಬಕಾರಿ ಜಿಲ್ಲಾ ಅಧಿಕಾರಿ ಎಲ್.ಎ.ಮಂಜುನಾಥ ಮಾಹಿತಿ ನೀಡಿದರು.