ಮಂಗಳೂರು: ಪ್ರಧಾನಿ ಮೋದಿಯವರ ಆಧಾರರಹಿತ ಹೇಳಿಕೆಗಳಿಂದಾಗಿ ದೇಶದ ಪ್ರಧಾನಿಯ ಮಾತನ್ನೂ ಜನರು ಶಂಕಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು.
‘ಮುಂಬೈ ಮೇಲಿನ 26/11ರ ದಾಳಿಯ ಬಳಿಕ ನಿರ್ದಿಷ್ಟ ದಾಳಿ ನಡೆಸಲು ಆಗಿನ ಯುಪಿಎಸರ್ಕಾರ ಅನುಮತಿ ನಿರಾಕರಿಸಿತ್ತು’ ಎಂಬ ಪ್ರಧಾನಿಯವರ ಹೇಳಿಕೆ ಕುರಿತು ನಗರದಲ್ಲಿ ಶನಿವಾರ ಸಚಿವರು ಪ್ರತಿಕ್ರಿಯಿಸಿದರು.
‘ಹಿಂದೆ ಪ್ರಧಾನಿ, ಮುಖ್ಯಮಂತ್ರಿಗಳ ಮಾತನ್ನು ಜನರು ಸಂಪೂರ್ಣವಾಗಿ ನಂಬುತ್ತಿದ್ದರು. ಅವರು ಆಧಾರವಿಲ್ಲದೇ ಮಾತನಾಡುವುದಿಲ್ಲ ಎಂಬ ನಂಬಿಕೆ ಜನರಲ್ಲಿ ಇತ್ತು. ಆದರೆ ಮೋದಿಯವರ ಹೇಳಿಕೆಗಳಿಂದಾಗಿ ಪ್ರಧಾನಿಯ ಮಾತು ಕೂಡ ಅಂತೆ, ಕಂತೆಗಳ ಗುಂಪಿಗೆ ಸೇರುತ್ತಿದೆ’ ಎಂದರು.