* ಮಂಡ್ಯದಲ್ಲಿ ಕೆಲವು ಕಾಂಗ್ರೆಸಿಗರು ತುಂಬಾ ಮುಂದೆ ಹೋಗಿದ್ದಾರೆ. ನಾನು ಸ್ವಾಭಿಮಾನ ಕಳೆದುಕೊಂಡು ಅಂಥವರು ಮುಂದೆ ಹೋಗಿ ಭಿಕ್ಷೆ ಬೇಡಲ್ಲ. ಬೆನ್ನಿಗೆ ಚೂರಿ ಹಾಕುವವರು ಬೇಕಾಗಿಲ್ಲ. ನನ್ನ ಕಾರ್ಯಕರ್ತರು ಸಮರ್ಥರಿದ್ದಾರೆ, ಅವರೇ ಸಾಕು. ಮೂಲ ಕಾಂಗ್ರೆಸ್ಸಿಗರು ನಿಖಿಲ್ಗೆ ಆಶೀರ್ವಾದ ಮಾಡಿದ್ದಾರೆ
-ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ
*ಯಾದಗಿರಿ ಜಿಲ್ಲೆ ಮತ್ತು ರಾಜ್ಯದಲ್ಲಿ ಜೆಡಿಎಸ್ನವರದ್ದೇ ನಡೆಯೋದು. ಕಾಂಗ್ರೆಸ್ ನಾಯಕರ ಮಾತಿಗೆ ಗೌರವವಿಲ್ಲ. ನಾವೆಲ್ಲಾ ಹಿರಿಯರಾದರೂ ರಾಜಕೀಯದಲ್ಲಿ ಚಿಕ್ಕವರಾದ ಜೆಡಿಎಸ್ ನಾಯಕರ ಮುಂದೆ ಹೋಗಿ ನಿಲ್ಲಬೇಕು. ಪಕ್ಷದ ರಾಜ್ಯ ನಾಯಕರ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ
-ಎ.ಬಿ. ಮಾಲಕರಡ್ಡಿ, ಕಾಂಗ್ರೆಸ್ನ ಮಾಜಿ ಶಾಸಕ
* ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳಿಗೆ ಲಜ್ಜೆ ಇರಬೇಕು. ಜನಪ್ರತಿನಿಧಿಗಳು ಲಜ್ಜಾಹೀನವಾಗಿ ಬದುಕಬಾರದು. ರಾಜಕೀಯ ಲಾಭಕ್ಕಾಗಿ ಜನರ ಮಾನ ಕಳೆಯಬಾರದು. ಆಗ ಮಾತ್ರ ಪ್ರಜಾಸತ್ತೆಗೆ ಗೌರವ ಸಿಗುತ್ತದೆ