ಆಡಿಯೊ ಕ್ಲಿಪ್ ಇವತ್ತಿನಿಂದಲ್ಲ:ಶ್ರೀರಾಮುಲು ಆಪ್ತ ಹಾಗೂ ದುಬೈ ಉದ್ಯಮಿ ಎನ್ನಲಾದ ವ್ಯಕ್ತಿಗಳ ನಡುವೆ ನಡೆದ ಸಂಭಾಷಣೆಯ ಆಡಿಯೊ ಕ್ಲಿಪ್ ಬಹಿರಂಗಗೊಂಡ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಆಡಿಯೊ ಕ್ಲಿಪ್ ಇವತ್ತಿನಿಂದಲ್ಲ, 6 ತಿಂಗಳು ಹಿಂದಿನದ್ದು. ಸರ್ಕಾರ ರಚನೆಯಾದಾಗಿನಿಂದಲೂ ಇಂತಹ ಆಮಿಷಗಳು ಬರುತ್ತಿವೆ. ದುಡ್ಡು ಕೊಡುತ್ತೇವೆ, ಸಚಿವ ಸ್ಥಾನ ನೀಡುತ್ತೇವೆ ಅಲ್ಲಿಗೆ ಬನ್ನಿ, ಇಲ್ಲಿಗೆ ಬನ್ನಿ ಎಂದು ಆಹ್ವಾನ ನೀಡಲಾಗುತ್ತಿದೆ. ಆದರೆ, ನಾವು ಯಾರೂ ಹೋಗುವುದಿಲ್ಲ’ ಎಂದರು.