ಬೆಂಗಳೂರು: ‘ದ್ವಿತೀಯ ಪಿಯು ಇಂಗ್ಲಿಷ್ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಭಾನುವಾರದೊಳಗೆ ಹಾಜರಾಗದಿದ್ದರೆ ಉಪನ್ಯಾಸಕರ ಒಂದು ವರ್ಷದ ವಾರ್ಷಿಕ ವೇತನ, ಬಡ್ತಿಯನ್ನು ಕಡಿತಗೊಳಿಸಲಾಗುವುದು ಹಾಗೂ ಜೂನ್ ತಿಂಗಳ ವೇತನ ತಡೆಹಿಡಿಯಲಾಗುವುದು’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.