‘ಭಾರತೀಯ ಭಾಷೆಗಳಲ್ಲಿಯ ಸಾಹಿತ್ಯ ಶ್ರೀಮಂತಿಕೆಯ ಪರಿಚಯ, ಪೋಷಣೆ ಮತ್ತುರಕ್ಷಣೆ ಮಾಡುವ ಕೆಲಸವನ್ನು ಪರಿಷದ್ 1966ರಿಂದ ಮಾಡುತ್ತ ಬಂದಿದೆ. ರಾಜ್ಯ ಘಟಕ 2015ರಲ್ಲಿ ಸ್ಥಾಪನೆಯಾಗಿದ್ದು, ಈಗಾಗಲೇ ಎರಡು ಸಮ್ಮೇಳನಗಳನ್ನು ನಡೆಸಲಾಗಿದೆ. ಜಗತ್ತಿಗೇ ಮೊದಲಿಗೆ ಬೃಹತ್ ಸಾಹಿತ್ಯ ಕೃತಿಗಳನ್ನು ನೀಡಿದ ಭಾರತದ ಆದಿಕವಿ ವಾಲ್ಮೀಕಿಯನ್ನು ಸ್ಮರಿಸಿ, ಅಂತಹ ಕೆಲಸ ಮುಂದುವರಿಸಿರುವ ಯೋಗ್ಯರಿಗೆ ಆದಿಕವಿ ಪ್ರಶಸ್ತಿ ನೀಡುವ ಗುರಿಯೊಂದಿಗೆ ಹೊಸ ಪುರಸ್ಕಾರ ಸ್ಥಾಪಿಸಲಾಗಿದೆ’ ಎಂದರು.