ದೇವನಹಳ್ಳಿ ತಾಲ್ಲೂಕು ಎಡಿಎಲ್ಆರ್ ಕಚೇರಿಯ ಸರ್ವೆಯರ್ ಎಚ್.ಆರ್.ಲಕ್ಷ್ಮಣ್ ಅವರನ್ನು ಬಂಧಿಸಲಾಗಿದೆ. ಸೋಲೂರು ಗ್ರಾಮದ ನಿವಾಸಿಯೊಬ್ಬರು ಗೋಮಾಳ ಜಮೀನಿನಲ್ಲಿ 2 ಎಕರೆಯನ್ನು 2008ರಲ್ಲಿ ಕಾನೂನು ಬಾಹಿರವಾಗಿ ಪೋಡಿ ಮಾಡಿಸಿಕೊಂಡಿದ್ದರು. ಅದನ್ನು ವಜಾ ಮಾಡುವಂತೆ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕೆ ₹15 ಸಾವಿರ ಲಂಚದ ಬೇಡಿಕೆಯನ್ನು ಸರ್ವೆಯರ್ ಇಟ್ಟಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.