ಚಿತ್ರದುರ್ಗ: ಸಾವಿರಾರು ಅಮಾಯಕರನ್ನು ಬಲಿ ಕೊಟ್ಟು ಯುದ್ಧ ಮಾಡುವುದು ದೇಶಭಕ್ತಿ ಅಲ್ಲ ಎಂದು ನಟ ಚೇತನ್ ಅಭಿಪ್ರಾಯಪಟ್ಟರು.
‘ದೇಶಭಕ್ತಿ ಏನು ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ದೇಶಭಕ್ತಿ ಪ್ರಕಟಿಸಲು ಯುದ್ಧವನ್ನೇ ಮಾಡಬೇಕಾಗಿಲ್ಲ. ಬರಪೀಡಿತ ಪ್ರದೇಶದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು ಹಾಗೂ ಅಲೆಮಾರಿಗಳ ಏಳಿಗೆಗೆ ಶ್ರಮಿಸುವುದು ನಿಜವಾದ ದೇಶಭಕ್ತಿ. ಇಂತಹ ಕೆಲಸಗಳು ಸ್ಫೂರ್ತಿ ಆಗಬೇಕು’ ಎಂದು ಹೇಳಿದರು.