‘ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ಗೆ ಇದು ಮೂರನೇ ಚುನಾವಣೆ. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸೋತರು. ಉಪಚುನಾವಣೆಯಲ್ಲೂ ಸೋಲು ಎದುರಾಗಲಿದೆ. ಕ್ರಿಕೆಟ್ನಲ್ಲಿ ಸರಣಿಯ ಎಲ್ಲ ಮೂರು ಪಂದ್ಯಗಳಲ್ಲಿ ಸೋತರೆ ‘ವೈಟ್ವಾಶ್’ ಅನ್ನುವರು. ಸಿದ್ದರಾಮಯ್ಯ ಅವರೂ ಉಪಚುನಾವಣೆ ಬಳಿಕ ಕಾಂಗ್ರೆಸ್ಗೆ ಬಿಳಿ ಬಣ್ಣ ಬಳಿದು ಮನೆಗೆ ಹೋಗುವರು’ ಎಂದು ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.