ಹಿಂದೊಮ್ಮೆ ಇಂಗಳಗಿ ಸೇರಿದಂತೆ ಸುತ್ತಲಿನ ಐದು ಹಳ್ಳಿಗಳ (ಕೇಸನೂರ, ಭಗವತಿ, ಮುಡಪೂಜಿ, ಆನದಿನ್ನಿ)ದೇಸಗತಿಯನ್ನು (ಒಡೆತನ) ಅಣ್ಣಾರಾವ್ ಎನ್.ದೇಶಪಾಂಡೆ (ದೇಸಾಯಿ) ಕುಟುಂಬ ಹೊಂದಿತ್ತು. ಈಗ ಅವರೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹದಲ್ಲಿ ಗ್ರಾಮದ 20ಕ್ಕೂ ಹೆಚ್ಚು ಕುಟುಂಬ ಸಂತ್ರಸ್ತವಾಗಿವೆ. ಅವರಲ್ಲಿ ಅಣ್ಣಾರಾವ್ ಮಕ್ಕಳಾದ ಅಶೋಕ ಹಾಗೂ ಹನುಮಂತ ಕೂಡಾ ಸೇರಿದ್ದಾರೆ. ಅವರಿಗೆ ಗ್ರಾಮದ ಶಂಕ್ರಪ್ಪ ರಡ್ಡೇರ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದಾರೆ.