ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಮಾನವ ಸರಪಳಿ ರಚಿಸಿ ಕೋಮು ಸೌಹಾರ್ದದ ಪರವಾಗಿ ಘೋಷಣೆಗಳನ್ನು ಕೂಗಿದರು. ಅಭಿಯಾನದ ಸ್ಥಳೀಯ ಸಮಿತಿಯ ಸಂಚಾಲಕ ಎಚ್.ಶರ್ಪುದ್ದೀನ್ ಪೋತ್ನಾಳ, ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಅಕ್ಬರ್ ಪಾಷಾ ಗುತ್ತದಾರ, ಮಹಾಂತಪ್ಪಗೌಡ ಭೋಗಾವತಿ, ರಮೇಶಬಾಬು ಯಾಳಗಿ, ಮಹ್ಮದ್ ಮುಜೀಬ್, ಪಿ.ಪರಮೇಶ, ಡಿ.ಬಸನಗೌಡ, ಕೆ.ಈ.ನರಸಿಂಹ, ಬಿ.ವಿ.ರೆಡ್ಡಿ, ತಾಯಪ್ಪ ಬಿ.ಹೊಸೂರು, ಲಕ್ಷ್ಮಣ ಜಾನೇಕಲ್, ಸಿದ್ದಲಿಂಗಯ್ಯ, ಸಂಗಮೇಶ ಮಧೋಳ, ಬಂದೇನವಾಜ್ ಇದ್ದರು.