ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರದಲ್ಲಿ ಅಕ್ಷಯ್‌ ಸಾಹಸ ಪ್ರದರ್ಶನ

Last Updated 30 ಜನವರಿ 2020, 19:45 IST
ಅಕ್ಷರ ಗಾತ್ರ

ಗುಂಡ್ಲುಪೇಟೆ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿರುವ ಡಿಸ್ಕವರಿ ಚಾನೆಲ್‌ನ ಜನಪ್ರಿಯ ಕಾರ್ಯಕ್ರಮ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ನ ಚಿತ್ರೀಕರಣದಲ್ಲಿ ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಗುರುವಾರ ಭಾಗವಹಿಸಿದ್ದರು.

ಮೂಲೆಹೊಳೆ, ರಾಂಪುರ ಮತ್ತು ಕಲ್ಕೆರೆ ಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸೆರಾಯ್ ಹೋಟೆಲ್‌ನಲ್ಲಿ ಅವರು ವಾಸ್ತವ್ಯ ಹೂಡಿದ್ದರು.

‘ಬಂಡೀಪುರ ಕಾಡಿನಲ್ಲಿ ಸುತ್ತಾಡಿ ಖುಷಿಪಟ್ಟಿದ್ದಾರೆ. ಕಲ್ಕೆರೆ ಅರಣ್ಯ ವಲಯದ ರಾಂಪುರ ಆನೆ ಶಿಬಿರದ ಸಮೀಪ ಎದೆಮಟ್ಟದ ನೀರಿನಲ್ಲಿ ಹಗ್ಗದ ಸಹಾಯದಿಂದ ಈಜುವ ಸಾಹಸ ಪ್ರದರ್ಶಿಸಿದರು. ಬಳಿಕ ಬೇರ್ ಗ್ರಿಲ್ಸ್ ಜೊತೆ ಸಂವಾದ ನಡೆಸಿದರು’ ಎಂದು ರಕ್ಷಣೆಗಾಗಿ ತೆರಳಿದ್ದ ಅರಣ್ಯ ಸಿಬ್ಬಂದಿಯೊಬ್ಬರು ‘‍ಪ್ರಜಾವಾಣಿ’ಗೆ ತಿಳಿಸಿದರು.

ಮಧ್ಯಾಹ್ನ 1 ಗಂಟೆವರೆಗೆ ಚಿತ್ರೀಕರಣದಲ್ಲಿ ಪಾಲ್ಗೊಂಡ ಅಕ್ಷಯ್‌, ಊಟ ಮುಗಿಸಿ ಮೈಸೂರಿಗೆ ತೆರಳಿದರು. ಬೇರ್ ಗ್ರಿಲ್ಸ್‌ ಮತ್ತು ತಂಡ ಮಧ್ಯಾಹ್ನ 3ಕ್ಕೆ ಹೆಲಿಕಾಪ್ಟರ್‌ನಲ್ಲಿ ವಾಪಸ್ಸಾಯಿತು.

ಮಂಗಳವಾರ ನಟ ರಜನಿಕಾಂತ್‌ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT