ದೆಹಲಿಯ ಅಂಚೆ ನೌಕರರ ರಾಷ್ಟ್ರೀಯ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಸಿ. ಪಿಳ್ಳೈ ಮಾತನಾಡಿ, ‘ಸರ್ಕಾರದ ಆರ್ಥಿಕ ನೀತಿಯಿಂದ ಅಂಚೆ ಕಚೇರಿ ನೌಕರರ ಮೇಲೆ ಹೊಡೆತ ಬೀಳ್ಳುತ್ತಿದೆ. ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡುತ್ತಿಲ್ಲ. ಖಾಲಿ ಇರುವ 1 ಲಕ್ಷ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಹೊಸ ಪಿಂಚಣಿಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೊಳಿಸಬೇಕು.ರೈಲ್ವೆ ಮೇಲ್ ಸರ್ವಿಸ್ (ಆರ್ಎಂಎಸ್), ಮೋಟರ್ ಮೇಲ್ ಸರ್ವಿಸ್, ಮೇಲ್ ಗಾರ್ಡ್ (ಎಂಜಿ), ಮಲ್ಟಿ ಟಾಸ್ಕ್ ಸ್ಟಾಫ್ (ಎಂಟಿಎಸ್)ಅಂಚೆ ನೌಕರರಿಗೆ ಭದ್ರತೆ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅಲ್ಲದೇ ರೈಲ್ವೆ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವರೀತಿಯಲ್ಲಿ ಅಂಚೆ ನೌಕರರ ಕುಟುಂಬಕ್ಕೂ ನೀಡಬೇಕು. ಇದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದಹೋರಾಡಬೇಕು’ ಎಂದರು.