ಅವರು ನಗರದ ಎಂ.ಟಿ.ಬಿ. ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ‘ನಾನು ಅಧಿಕಾರಕ್ಕಾಗಿ ಬಿಜೆಪಿಗೆ ಬರಲಿಲ್ಲ. ನನ್ನನ್ನು ಹೊಸಕೋಟೆಗೆ ಎಸ್.ಎಂ ಕೃಷ್ಣ ಕರೆತಂದರು. ನನಗಿಂತ ಮೊದಲು ಇಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಮುನೇಗೌಡರು ಮೂರು ಬಾರಿ ಸೋತಿದ್ದರು. ಅದಕ್ಕೆ ಗತಿ ಇಲ್ಲದೆ ನನ್ನನ್ನು ತಂದು ಮಿನಿ ಬಿಹಾರದಂತಿದ್ದ ಇಲ್ಲಿಗೆ ನಿಲ್ಲಿಸಿದರು’ ಎಂದರು.