ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬರೀಷ್‌ ಅಂತಿಮ ಯಾತ್ರೆ: ಕಂಠೀರವ ಸ್ಟುಡಿಯೊದತ್ತ ಮೆರವಣಿಗೆ

Last Updated 26 ನವೆಂಬರ್ 2018, 6:58 IST
ಅಕ್ಷರ ಗಾತ್ರ

ಬೆಂಗಳೂರು: ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಮಂಡ್ಯದಿಂದ ಕಂಠೀರವ ಕ್ರೀಡಾಂಗಣಕ್ಕೆ ತರಲಾಗಿದ್ದು, ಇಲ್ಲಿಂದ ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೊಕ್ಕೆ ಕೊಂಡೊಯ್ಯಲು ವಾಹನ ಸಿದ್ಧವಾಗಿದೆ‌.

ಶರೀರ ಹೊತ್ತೊಯ್ಯಲು 'ಸೇಂಟ್ ಪೀಟರ್ಸ್' ಅವರ ವಾಹನ ಸಿದ್ಧಪಡಿಸಲಾಗಿದೆ‌. ಹೂವಿನ ಅಲಂಕಾರ ಮಾಡಲಾಗಿದೆ. ವಾಹನದ ಮುಂದೆ ಅಂಬರೀಷ ಅವರ ಭಾವಚಿತ್ರವಿದೆ.

ವಾಹನದ ನಾಲ್ಕು ಕಡೆಯಲ್ಲೂ ಗಾಜು ಇದ್ದು, ರಸ್ತೆಯುದ್ದಕ್ಕೂ ಜನರುಅಂಬರೀಷ್ಅವರ ಪಾರ್ಥಿವ ಶರೀರ ನೋಡಲು ಅನುಕೂಲವಾಗಲಿದೆ.

ಮೆರವಣಿಗೆಯಲ್ಲಿ ವಾಹನದ ಹಿಂದೆ- ಮುಂದೆ ಪೊಲೀಸರ ಸರ್ಪಗಾವಲು ಇದೆ. ಜೊತೆಗೆ ಅಶ್ರವಾಯು ವಾಹನಗಳು ಮೆರವಣಿಗೆಯಲ್ಲಿ ಇವೆ. ಕೆಎಸ್ಆರ್‌ಪಿಖಾಲಿ ವಾಹನಗಳು ಮೆರವಣಿಗೆಯಲ್ಲಿ ಇರಲಿದ್ದು, ಶಾಂತಿಗೆ ಧಕ್ಕೆ ತರುವವರನ್ನು ವಶಕ್ಕೆ ಪಡೆದು ಆ ವಾಹನಗಳಲ್ಲಿ ಇರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT