‘ಶನಿವಾರ ಕೂಡ ಎಂದಿನಂತೆ ಮನೆಯಲ್ಲೇ ಊಟ ಮಾಡಿದರು. ಸುಸ್ತಾಗುತ್ತಿದೆ ಎಂದು ಹೇಳಿ, ಮಲಗುವ ಕೋಣೆಯ ಕಡೆಗೆ ನಡೆದರು. ಕೆಲವೇ ಕ್ಷಣಗಳಲ್ಲಿ ಗೋಡೆ ಹಿಡಿದುಕೊಂಡು ಕುಸಿದು ಬಿದ್ದರು. ಅಲ್ಲಿಯೇ ಇದ್ದ ವಿಕ್ರಮ್ ಆಸ್ಪತ್ರೆಯ ಸಿಬ್ಬಂದಿ (ಕೇರ್ ಟೇಕರ್) ಆಮ್ಲಜನಕದ ಸಂಪರ್ಕ ನೀಡಿದರು. ಕಾರ್ಡಿಯಾಕ್ ಮಸಾಜ್ ಮಾಡಿದರು. ಆದರೆ ದೇಹ ತಣ್ಣಗಾಗುತ್ತಾ ಬಂತು. ತಕ್ಷಣವೇ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆತಂದರು’ ಎಂದರು.