ಕೃಷಿಗೆ ಲಾಭದಾಯಕ ಮಾರುಕಟ್ಟೆಯ ವ್ಯವಸ್ಥೆಯಿಲ್ಲದ ಪರಿಸ್ಥಿತಿಯಲ್ಲಿ ರಾಜ್ಯದ ರೈತರು ಸುಮಾರು 25 ಟಿಎಂಸಿ ಅಡಿಗಳಷ್ಟು ನೀರನ್ನು ಅಂತರ್ಜಲದ ರೂಪದಲ್ಲೇ ಬಳಸುತ್ತಿದ್ದಾರೆ. ಅದಕ್ಕೆ ಬೇಕಾದ ವಿದ್ಯುತ್ ಅನ್ನು ಕನಿಷ್ಠ ರಿಯಾಯಿತಿ ದರದಲ್ಲೇ ಕೊಡಬೇಕು. ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ಮಾರಾಟಕ್ಕೆ ಪ್ರತ್ಯೇಕ ಘಟಕಗಳಿರಬೇಕು. ಯಾವ ಘಟಕವೇ ಆದರೂ ಲಾಭ ತಂದರೆ ಮಾತ್ರ ಉಳಿಸಬೇಕು ಎಂಬ ನಿಲುವು ಸರಿಯಲ್ಲ. ವಿದ್ಯುತ್ ಉತ್ಪಾದನೆ ಮತ್ತು ಖರೀದಿಯ ಸ್ವಾಯತ್ತೆಯನ್ನು ಉಳಿಸಬೇಕು.