ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಕಾಯ್ದೆಗೆ ತಿದ್ದುಪಡಿ: ಜನವಿರೋಧಿ ಆಗದಿರಲಿ ತಿದ್ದುಪಡಿ

Last Updated 3 ಜೂನ್ 2020, 3:10 IST
ಅಕ್ಷರ ಗಾತ್ರ

ಯಾವುದೇ ಕಾಯ್ದೆಯ ತಿದ್ದುಪಡಿ ಎಂಬುದು ಜನಪರವಾಗಿರಬೇಕು. ಆದರೆ, ಖಾಸಗಿಯವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಈಗ ಕೇಂದ್ರ ಸರ್ಕಾರವು ಕಾಯ್ದೆಗೆ ಜನವಿರೋಧಿ ನೆಲೆಯಲ್ಲಿ ತಿದ್ದುಪಡಿ ಮಾಡಲು ಹೊರಟಿದೆ.

ಕೃಷಿಗೆ ಲಾಭದಾಯಕ ಮಾರುಕಟ್ಟೆಯ ವ್ಯವಸ್ಥೆಯಿಲ್ಲದ ಪರಿಸ್ಥಿತಿಯಲ್ಲಿ ರಾಜ್ಯದ ರೈತರು ಸುಮಾರು 25 ಟಿಎಂಸಿ ಅಡಿಗಳಷ್ಟು ನೀರನ್ನು ಅಂತರ್ಜಲದ ರೂಪದಲ್ಲೇ ಬಳಸುತ್ತಿದ್ದಾರೆ. ಅದಕ್ಕೆ ಬೇಕಾದ ವಿದ್ಯುತ್‌ ಅನ್ನು ಕನಿಷ್ಠ ರಿಯಾಯಿತಿ ದರದಲ್ಲೇ ಕೊಡಬೇಕು. ವಿದ್ಯುತ್‌ ಉತ್ಪಾದನೆ, ಪ್ರಸರಣ ಮತ್ತು ಮಾರಾಟಕ್ಕೆ ಪ್ರತ್ಯೇಕ ಘಟಕಗಳಿರಬೇಕು. ಯಾವ ಘಟಕವೇ ಆದರೂ ಲಾಭ ತಂದರೆ ಮಾತ್ರ ಉಳಿಸಬೇಕು ಎಂಬ ನಿಲುವು ಸರಿಯಲ್ಲ. ವಿದ್ಯುತ್‌ ಉತ್ಪಾದನೆ ಮತ್ತು ಖರೀದಿಯ ಸ್ವಾಯತ್ತೆಯನ್ನು ಉಳಿಸಬೇಕು.

ವಿದ್ಯುತ್‌ ಸಹಾಯಧನ ರದ್ದಾಗುವ ಅಪಾಯ ರೈತರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಕರ್ನಾಟಕದ ಒಟ್ಟಾರೆ ಅಭಿವೃದ್ಧಿಗೇ ಸಂಬಂಧಿಸಿದ್ದು, ಕೃಷಿ ಕ್ಷೇತ್ರವು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ರಾಜ್ಯದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಸುತ್ತದೆ. ವಿದ್ಯುತ್‌ ಕಾಯ್ದೆಗೆ ತಿದ್ದುಪಡಿ ತರುವ ಮುನ್ನ ಈ ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳಲೇಬೇಕು.

-ಜೆ.ಎಂ.ವೀರಸಂಗಯ್ಯ, ರಾಜ್ಯ ರೈತ ಸಂಘ–ಹಸಿರು ಸೇನೆ ಕಾರ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT