ಮಂಡ್ಯ: ಬಂಡೂರು ಕುರಿ ತಳಿಗೆ ಪ್ರಸಿದ್ಧಿ ಪಡೆದಿರುವ ಮಳವಳ್ಳಿ ತಾಲ್ಲೂಕು, ಕಿರುಗಾವಲು ಸಂತೆಯಲ್ಲಿ ಶನಿವಾರ ಶ್ರೀನಿವಾಸಪುರ ಶಾಸಕ, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಬಂಡೂರು ಕುರಿ ಖರೀದಿಸಿದರು.
ವರಕೋಡು ಗ್ರಾಮದ ರೈತ ಸ್ವಾಮಿ ಅವರಿಂದ ₹ 25 ಸಾವಿರಕ್ಕೆ ಕುರಿ ಮರಿ ಖರೀದಿಸಿದರು. ಬೆಳಿಗ್ಗೆಯೇ ಬಂದಿದ್ದ ಅವರು ಸಂತೆಯಲ್ಲಿ ಸುತ್ತಾಡಿ ವಿವಿಧ ತಳಿಯ ಕುರಿಗಳನ್ನು ಕಂಡ ಸಂತಸ ವ್ಯಕ್ತಪಡಿಸಿದರು. ಈ ಹಿಂದೆಯೂ ಅವರು ಹಲವು ಸಂತೆಗಳಿಗೆ ಭೇಟಿ ನೀಡಿ ಕುರಿ ಖರೀದಿ ಮಾಡಿದ್ದರು.