ಹೊಸಪೇಟೆ: ಮಾಜಿ ಶಾಸಕ ಶಂಕರಗೌಡ ಅವರ ಮಗ, ಬಿಜೆಪಿ ಮುಖಂಡ ಭರಮನಗೌಡ ಅವರ ಮನೆಗೆ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಹಿಂತಿರುಗುವಾಗ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರು ಸಿ.ಎಂ. ಅವರಿಗೆ ಚಪ್ಪಲಿಗಳನ್ನು ಎತ್ತಿ ಕೊಟ್ಟರು.
ಮನೆಯಲ್ಲಿ ಕಿಕ್ಕಿರಿದು ಜನ ನೆರೆದಿದ್ದರಿಂದ ಗಣ್ಯರು ಬಿಟ್ಟು ಹೋಗಿದ್ದ ಚಪ್ಪಲಿಗಳ ಜಾಗ ಬದಲಾಗಿತ್ತು. ಭರಮನಗೌಡ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಹಿಂತಿರುಗುವಾಗ ಸಿ.ಎಂ. ತಮ್ಮ ಚಪ್ಪಲಿಗಳನ್ನು ಹುಡುಕಾಡಿದರು. ಆಗ ಅದನ್ನು ಗಮನಿಸಿದ ಆನಂದ್ ಸಿಂಗ್ ತಕ್ಷಣವೇ ಅವರ ಚಪ್ಪಲಿಗಳನ್ನು ಎತ್ತಿ ಕೊಟ್ಟರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಚುನಾವಣಾ ಪ್ರಚಾರಕ್ಕಾಗಿ ಸೋಮವಾರ ಬಳ್ಳಾರಿಗೆ ತೆರಳಿದ್ದಾರೆ.