ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂಗೆ ಚಪ್ಪಲಿ ತೆಗೆದುಕೊಟ್ಟ ಆನಂದ್‌ ಸಿಂಗ್‌

Last Updated 25 ನವೆಂಬರ್ 2019, 8:53 IST
ಅಕ್ಷರ ಗಾತ್ರ

ಹೊಸಪೇಟೆ: ಮಾಜಿ ಶಾಸಕ ಶಂಕರಗೌಡ ಅವರ ಮಗ, ಬಿಜೆಪಿ ಮುಖಂಡ ಭರಮನಗೌಡ ಅವರ ಮನೆಗೆ ಬಿ.ಎಸ್‌.ಯಡಿಯೂರಪ್ಪ ಭೇಟಿ ನೀಡಿ ಹಿಂತಿರುಗುವಾಗ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರು ಸಿ.ಎಂ. ಅವರಿಗೆ ಚಪ್ಪಲಿಗಳನ್ನು ಎತ್ತಿ ಕೊಟ್ಟರು.

ಮನೆಯಲ್ಲಿ ಕಿಕ್ಕಿರಿದು ಜನ ನೆರೆದಿದ್ದರಿಂದ ಗಣ್ಯರು ಬಿಟ್ಟು ಹೋಗಿದ್ದ ಚಪ್ಪಲಿಗಳ ಜಾಗ ಬದಲಾಗಿತ್ತು. ಭರಮನಗೌಡ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಹಿಂತಿರುಗುವಾಗ ಸಿ.ಎಂ. ತಮ್ಮ ಚಪ್ಪಲಿಗಳನ್ನು ಹುಡುಕಾಡಿದರು. ಆಗ ಅದನ್ನು ಗಮನಿಸಿದ ಆನಂದ್‌ ಸಿಂಗ್‌ ತಕ್ಷಣವೇ ಅವರ ಚಪ್ಪಲಿಗಳನ್ನು ಎತ್ತಿ ಕೊಟ್ಟರು.

ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಚುನಾವಣಾ ಪ್ರಚಾರಕ್ಕಾಗಿ ಸೋಮವಾರ ಬಳ್ಳಾರಿಗೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT