ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶ್ರೀರಾಮಲು ಹಾಗೂ ರೆಡ್ಡಿ ಸಹೋದರರು ಜಿಲ್ಲೆಯಲ್ಲಿ ಪ್ರಭಾವ ಕಳೆದುಕೊಂಡಿಲ್ಲ. ಶ್ರೀರಾಮಲು ಬಳ್ಳಾರಿಯ ಮಣ್ಣಿನ ಮಗ. ಅವರಿಗೆ ಬಳ್ಳಾರಿ ಜನ ಆಶೀರ್ವಾದ ಮಾಡಿದ್ದಾರೆ. ಸಚಿವ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಂದು ಪ್ರಚಾರ ಮಾಡಿದರೆ, ಜನ ಆವೇಶದಿಂದ ಬಿಜೆಪಿಗೆ ಹೆಚ್ಚು ವೋಟು ಹಾಕುತ್ತಾರೆ’ ಎಂದರು.