ಸಭೆಯಲ್ಲಿ ಮಾತನಾಡಿದ ಪದಾಧಿಕಾರಿಗಳು, ‘ಆರೋಗ್ಯ ಇಲಾಖೆಯ ಕುಷ್ಠರೋಗಿಗಳ ಪತ್ತೆ ಆಂದೋಲನದಲ್ಲಿ ನಮ್ಮ ಕಾರ್ಯಕರ್ತೆಯರು ಭಾಗವಹಿಸುವುದಿಲ್ಲ’ ಎಂದು ಒಕ್ಕೊರಲಿನಿಂದ ಹೇಳಿದರು. ಇದಕ್ಕೆ ಒಪ್ಪಿದ ಸಚಿವೆ, ‘ಕಾರ್ಯಕರ್ತೆಯರು ಭಾಗವಹಿಸಬೇಕಿಲ್ಲ. ಈ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡುತ್ತೇನೆ’ ಎಂದು ಭರವಸೆ ನೀಡಿದರು.