ಅನುಕಂಪ: ಕಳೆದ ಬಾರಿ ಕಣಕ್ಕಿಳಿದಿದ್ದ ಲಕ್ಷ್ಮಿ ಹೆಬ್ಬಾಳಕರ, 4.78 ಲಕ್ಷ ಮತ ಪಡೆದು ಹಾಲಿ ಸಂಸದ ಬಿಜೆಪಿಯ ಸುರೇಶ ಅಂಗಡಿ ಅವರಿಗೆ ತೀವ್ರ ಪೈಪೋಟಿ ನೀಡಿದ್ದರು. ಜಾರಕಿಹೊಳಿ ಕುಟುಂಬದ ಹಿಡಿತ ಇರುವ ಗೋಕಾಕ, ಅರಭಾವಿ ವಿಧಾನಸಭಾ ಕ್ಷೇತ್ರಗಳಲ್ಲಿ ಅಂಗಡಿಯವರಿಗಿಂತಲೂ ಹೆಚ್ಚು ಮತ ಪಡೆದಿದ್ದರು. ಇದರ ಜತೆಗೆ ಮಹಿಳೆ ಎನ್ನುವ ‘ಅನುಕಂಪ’ವೂ ಕೆಲಸ ಮಾಡಿತ್ತು. ಅದೇ ರೀತಿ ಈ ಸಲವೂ ಅಂಜಲಿ ಕಣಕ್ಕಿಳಿಸಿದರೆ ಅನುಕೂಲ ಆಗಬಹುದು ಎನ್ನುವ ಲೆಕ್ಕಾಚಾರ ನಡೆದಿದೆ.