ಚಿಂತಕ ಸಿ.ಎಸ್.ದ್ವಾರಕನಾಥ್ ಮಾತನಾಡಿ, ‘ಕೆಲವು ಚಿತ್ಪಾಲ ಬ್ರಾಹ್ಮಣರು ಮಹಾತ್ಮ ಗಾಂಧಿಯನ್ನು ಕೊಲ್ಲುವಂತಹ ತಂತ್ರ ಹೆಣೆದ ನಾಗಪುರದ ಕ್ಯಾಂಪಿನಿಂದಲೇ ಈ ‘ಸಿಎಎ’ ಸೂತ್ರ ರಚಿಸಲಾಗಿದೆ. ‘ಇವನಾರವ, ಇವನಾರವ’ ಎಂದು ಕೇಳುವ ಮೂಲಕ ಇದು ಸಂವಿಧಾನದ ಆಶಯಗಳಿಗೆ ಮಾತ್ರವಲ್ಲ, ಬಸವಣ್ಣನವರ ತತ್ವಗಳಿಗೂ ವಿರುದ್ಧವಾದುದು’ ಎಂದರು.