ಕಲಾವಿದ ಗಣೇಶ ಕೃಷ್ಣ ಧಾರೇಶ್ವರ ಅವರ ‘ಮಂಕುತಿಮ್ಮನ ಕಗ್ಗ’ ಹಾಗೂ ‘ಅನ್ಬೌಂಡೆಡ್ ವಿಷನ್’ ಕಲಾಕೃತಿಗಳ ಪ್ರದರ್ಶನ ಸೋಮವಾರ (ಮೇ 13) ಸಂಜೆ 5 ಗಂಟೆಗೆ ನಡೆಯಲಿದೆ. ಚಿ.ಸು.ಕೃಷ್ಣಸೆಟ್ಟಿ ಅವರು ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.
ವಾಸ್ತುಶಿಲ್ಪ ತಜ್ಞರಾದ ಎಸ್.ಸತೀಶ್ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅನಂತತೆಯನ್ನು ಸೂಚಿಸುವ ಕಲಾಕೃತಿಗಳು ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿರುವ ಮೂರನೇ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳಲಿವೆ.
ಛಾಯಾಚಿತ್ರ ಪ್ರದರ್ಶನ ವಿಶ್ವ ತಾಯಂದಿರ ದಿನದ ಅಂಗವಾಗಿ ನಗರದಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.
ಕಲಾವಿದ ಕೋಟೆಗದ್ದೆ ಎಸ್.ರವಿ ವಿಶೇಷ ಛಾಯಾಚಿತ್ರಗಳನ್ನುಮೇ 18ರವರೆಗೆ ಪ್ರದರ್ಶಿಸಲಿದ್ದಾರೆ. ಉಡುಗೊರೆ ನೀಡುವವರಿಗಾಗಿ ಅಮ್ಮಂದಿರ ಚಿತ್ರಗಳನ್ನು ಸ್ಥಳದಲ್ಲೇ ಅವರು ಬಿಡಿಸಿ ಕೊಡುತ್ತಾರೆ.
ಸ್ಥಳ: ಫಿಡಿಲಿಟಸ್ ಗ್ಯಾಲರಿ, ಎಆರ್ಆರ್ ಆರ್ಕೆಡ್, 6ನೇ ಅಡ್ಡರಸ್ತೆ, ವಿಕ್ಟೋರಿಯಾ ಲೇಔಟ್