ಬೆಂಗಳೂರು: ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ವತಿಯಿಂದ 19ನೇ ವರ್ಷದ ವಧುವರರ ಮುಖಾಮುಖಿ ಕಾರ್ಯಕ್ರಮ ನ. 25ರಂದು ಶೇಷಾದ್ರಿಪುರ ರಾಜೀವ ಗಾಂಧಿ ವೃತ್ತದ ಬಳಿಯ ಆರ್ಯ ಈಡಿಗರ ಭವನದಲ್ಲಿ ಬೆಳಿಗ್ಗೆ 11.30ಕ್ಕೆ ನಡೆಯಲಿದೆ.
ಅರ್ಹ, ಆಸಕ್ತ ವಧುವರರು ನ. 20ರ ಒಳಗೆ ಹೆಸರು ನೋಂದಾಯಿಸಬೇಕು ಎಂದು ಸಂಘದ ಜಂಟಿ ಕಾರ್ಯದರ್ಶಿ ಜಿ.ಒ. ಕೃಷ್ಣ ತಿಳಿಸಿದ್ದಾರೆ.
ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ ಪೋಸ್ಟ್ ಕಾರ್ಡ್ ಅಳತೆಯ ಭಾವಚಿತ್ರದೊಂದಿಗೆ ಸಲ್ಲಿಸಬೇಕಾದ ವಿಳಾಸ:ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ನಂ 185, ಈಡಿಗ ಭವನ ರಾಜೀವ ಗಾಂಧಿ ವೃತ್ತ, ಶೇಷಾದ್ರಿಪುರ ಬೆಂಗಳೂರು –20. ದೂರವಾಣಿ:080-23560574/ 48145442