‘ಬಸವಣ್ಣನ ನಾಡು ನಮ್ಮದು’ ಎಂದು ರಾಜಕುಮಾರ್ ಹೇಳುತ್ತಿದ್ದಂತೆಯೇ, ‘ಲಿಂಗಾಯತ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದವರು ಅವರು’ ಎಂದು ಬಿಜೆಪಿಯ ಎ.ಎಸ್. ಪಾಟೀಲ (ನಡಹಳ್ಳಿ) ಕಾಂಗ್ರೆಸ್ ಸದಸ್ಯರತ್ತ ಕೈ ತೋರಿಸಿದರು. ಅದಕ್ಕೆ ಬಿಜೆಪಿಯ ಬಸನಗೌಡ ಪಾಟೀಲ (ಯತ್ನಾಳ), ಎಂ.ಪಿ.ರೇಣುಕಾಚಾರ್ಯ, ಸಿ.ಸಿ. ಪಾಟೀಲ ಧ್ವನಿಗೂಡಿಸಿದರು.