‘ಹಣ ಡ್ರಾ ಮಾಡಲು ಇದೇ 8ರಂದು ಟಿ.ಸಿ.ಪಾಳ್ಯ ಮುಖ್ಯರಸ್ತೆಯ ಆನಂದಪುರದ ಎಸ್ಬಿಐ ಬ್ಯಾಂಕ್ ಎಟಿಎಂ ಘಟಕಕ್ಕೆ ಹೋಗಿದ್ದೆ. ಯಂತ್ರದಿಂದ ಹಣ ಡ್ರಾ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಸಹಾಯಕ್ಕೆ ಬಂದಿದ್ದ ಅಪರಿಚಿತ, ನನ್ನ ಎಟಿಎಂ ಪಡೆದು ₹ 5,000 ತೆಗೆಸಿಕೊಟ್ಟಿದ್ದ. ನಂತರ, ಕಾರ್ಡ್ ಅನ್ನು ನನ್ನ ಕೈಗಿಟ್ಟು ಹೊರಟು ಹೋಗಿದ್ದ. ನಾನು ಮನೆಗೆ ಬಂದಿದ್ದೆ’ ಎಂದು ಮೋಹನ್ ದೂರಿನಲ್ಲಿ ತಿಳಿಸಿದ್ದಾರೆ.