ವೃಕ್ಷಲಕ್ಷ ಆಂದೋಲನದ ಅನಂತ ಅಶೀಸರ ಮಾತನಾಡಿ, ‘ಎರಡು ವರ್ಷದಿಂದ ಕೈಗಾ 5 ಮತ್ತು 6ನೇ ಘಟಕ ಸ್ಥಾಪನೆಗೆ ವಿರೋಧಿಸುತ್ತ ಬಂದಿದ್ದೇವೆ. ಜಿಲ್ಲೆಯ ವಿವಿಧಡೆ ಸಭೆ ನಡೆಸಿ, ಜನಜಾಗೃತಿ ಮಾಡಲಾಗಿದೆ. ಸರ್ಕಾರ ಕರೆದಿರುವ ಅಹವಾಲು ಆಲಿಕೆ ಸಭೆಯಲ್ಲಿ ಹೆಚ್ಚು ಜನರು ಭಾಗವಹಿಸಿ ವಿರೋಧ ವ್ಯಕ್ತಪಡಿಸಬೇಕು’ ಎಂದರು. ಪ್ರಮುಖರಾದ ಪ್ರಭಾಕರ ಭಟ್ಟ, ಕೇಶವ ಕೊರ್ಸೆ, ರವೀಂದ್ರ ನಾಯ್ಕ, ಚಂದ್ರು ದೇವಾಡಿಗ ಉಪಸ್ಥಿತರಿದ್ದರು. ನಂತರ ಸ್ಥಳೀಯರೊಂದಿಗೆ ಸಂವಾದ ನಡೆಯಿತು.