ರಮ್ಯಾ ಅವರ ರಾಜಕೀಯ ಪ್ರವೇಶಕ್ಕೆ ಮಂಡ್ಯದಲ್ಲಿ ವೇದಿಕೆ ಕಲ್ಪಿಸಿದ್ದೇ ಅಂಬರೀಷ್. ಅವರು ಸಂಸದೆಯಾಗಿ ಆಯ್ಕೆಯಾಗಲು ಅಂಬಿ ಅವರ ಪರಿಶ್ರಮ ಹೆಚ್ಚಿತ್ತು. ಆದರೆ, ರಾಜಕೀಯ ರಂಗದ ಚದುರಂಗದಾಟದಲ್ಲಿ ರಮ್ಯಾ, ಅಂಬಿ ಬಳಗದಿಂದ ದೂರ ಉಳಿದಿದ್ದರು. ಅಂಬರೀಷ್ ಅವರ ಅಂತ್ಯಸಂಸ್ಕಾರದಲ್ಲಿ ಚಿತ್ರರಂಗದ ಗಣ್ಯರು, ರಾಜಕಾರಣಿಗಳು, ಹೊರರಾಜ್ಯ ಮತ್ತು ವಿದೇಶದಲ್ಲಿರುವ ಅವರ ಸ್ನೇಹಿತರು ಪಾಲ್ಗೊಂಡಿದ್ದರು.