ಮಹಾರಾಷ್ಟ್ರದ ಸೊಲ್ಲಾಪುರದ ಬಾಲಾಜಿ ರಮೇಶ ಗಾಯಕವಾಡ (25), ಹರಿಯಾಣದ ಬಲವಾನ್ ಸಿಂಗ್ (24), ರಾಜಸ್ಥಾನದವರಾದ ಶ್ರೀರಾಮ ಬಿಸ್ನೋಯಿ (23) ಮತ್ತು ಓಂಪ್ರಕಾಶ್ (27) ಬಂಧಿತರು.
Bengaluru City Police: Four people have been arrested in connection with a robbery attempt at a jewellery shop, yesterday, in Vinayaka Circle. #Karnatakapic.twitter.com/v54SKT6IxT
ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಆರೋಪಿಗಳನ್ನು ವಿನಾಯಕ ನಗರದ ಡಿವಿಜಿ ಬಡಾವಣೆಯಿಂದ ಬಂಧಿಸಲಾಗಿದೆ. ಬಂಧಿತರಿಂದ ನಾಡಪಿಸ್ತೂಲ್ ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದರು.
ಬುಧವಾರ ರಾತ್ರಿಯೇ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಅವರು ವಿವರಿಸಿದರು.
ಬುಧವಾರ ಮಧ್ಯಾಹ್ನ 2.40ರ ಸುಮಾರಿಗೆ ಚಿನ್ನ ಖರೀದಿ ನೆಪದಲ್ಲಿ ಮೂವರು ದರೋಡೆಕೋರರು ಚಿನ್ನದ ಮಳಿಗೆಗೆ ಬಂದಿದ್ದರು.
ಸರ ಕೇಳಿದ ಆರೋಪಿಗಳು ಬಳಿಕ ಗುಂಡು ಹಾರಿಸಿ ಬೆದರಿಸಿದ್ದರು. ಕೂಡಲೇ ಮಾಲೀಕರ ಪತ್ನಿ ರಾಖಿ ಎಂಬುವವರು ಕುರ್ಚಿ ತೆಗೆದು ಎಸೆದು ಕೂಗಿದ್ದರು. ಆಗ ದರೋಡೆಕೋರರು ಮಿಸ್ ಫೈರ್ ಮಾಡಿ ಪರಾರಿಯಾಗಿದ್ದರು.