ಅದಕ್ಕೆ ತಾಳ್ಮೆಯಿಂದಲೇ ಪ್ರತಿಕ್ರಿಯಿಸಿರುವ ಬಣಕಾರ, ‘ಅಷ್ಟೊಂದು ಜೋರಾಗಿ ಯಾಕೆ ಕೂಗಾಡ್ತೀಯಾ? ರೊಕ್ಕ ಹೊಡೆದಿದ್ದೀನಿ ಎಂದೆಲ್ಲ ಹೇಳಬೇಡ. ಸದ್ಯ ಬಿಜೆಪಿಯಲ್ಲಿದ್ದೇನೆ. ಅದಕ್ಕಾಗಿ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ಕೊಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಆದೇಶಕ್ಕಾಗಿ ಕಾಯಬೇಕು. ಒಂದು ವೇಳೆ ಅವರು ಅನರ್ಹರಾದರೆ, ನಿಗಮ ಮಂಡಳಿಗೆ ರಾಜೀನಾಮೆ ಕೊಟ್ಟು ಅಖಾಡಕ್ಕೆ ಇಳೀತಿನಿ. ಇದು ಹಂಡ್ರೆಡ್ ಪರ್ಸೆಂಟ್ ಕನ್ಫರ್ಮ್’ ಎಂದು ಹೇಳುವ ಮೂಲಕ ಆ ವಕೀಲನನ್ನು ಸಮಾಧಾನಪಡಿಸಿದ್ದಾರೆ.