‘ಅನಿವಾರ್ಯವಾಗಿ ದೇವದಾಸಿಯರಾಗಿದ್ದೀರಿ. ಇದರಿಂದ ಹೊರಬಂದರೆ ನಿಮ್ಮ ಬದುಕು ಉತ್ತಮಗೊಳಿಸಲು ಸರ್ಕಾರದ ಯೋಜನೆಗಳ ಜತೆಗೆ ನಾನೂ ಸಹಕಾರ ನೀಡುವೆ’ ಎಂದು ಭರವಸೆ ನೀಡಿದರು. ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಎಚ್. ವಿಜಯಕುಮಾರ್, ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಜೆ. ಮೋಕ್ಷಪತಿ ಇದ್ದರು.