ಇದಕ್ಕೂ ಮುಂಚೆ ಸಭೆಯಲ್ಲಿ ಮಾತನಾಡಿದ ಬ್ಯಾಂಕ್ ಪ್ರತಿನಿಧಿ ಜಿ. ರಾಜಕುಮಾರ, ‘ಬೈಲಹೊಂಗಲ ವಿಭಾಗದ 65 ರೈತರ ಪೈಕಿ 42 ಜನರು ಮಾತ್ರ ಸಾಲ ಮನ್ನಾ ವ್ಯಾಪ್ತಿಗೆ ಬರುತ್ತಾರೆ. ಇವರ ಸಮಸ್ಯೆ ಇಲ್ಲ. ಇನ್ನುಳಿದ ರೈತರು ಟ್ರಾಕ್ಟರ್, ಪೈಪ್ಲೈನ್ ಅಳವಡಿಕೆಗಾಗಿ ಸಾಲ ಪಡೆದಿದ್ದು, ಅವರಿಗೆ ಮನ್ನಾ ಸೌಲಭ್ಯ ದೊರೆಯುವುದಿಲ್ಲ’ ಎಂದು ಹೇಳಿದರು.