ಸೋಲು ಗೆಲುವಿನ ಭಾವ ಬೇಡ
‘ದೇಶದ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇವೆ. ಯಾರಲ್ಲಿಯೂ ಸೋಲು, ಗೆಲುವು ಎನ್ನುವ ಭಾವನೆ ಬೇಡ. ಶಾಂತಿ, ಸೌಹಾರ್ದತೆಯಿಂದ ತೀರ್ಪನ್ನು ಗೌರವಿಸಬೇಕಾಗುತ್ತದೆ. ಸಂವಿಧಾನದ ಆಶಯಗಳಿಗೆ ಪೂರಕವಾಗಿ ತೀರ್ಪು ಹೊರಬಿದ್ದಿದೆ’ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.