ನಂಜನಗೂಡಿನ ರೈತ ಮುಖಂಡ ವಿದ್ಯಾಸಾಗರ ರಾಮೇಗೌಡ ಅವರನ್ನು ಸಂಘದಿಂದ ಉಚ್ಛಾಟಿಸಿರುವುದಾಗಿ ಈ ಮೂವರೂ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ. ಆದರೆ, ವಿದ್ಯಾಸಾಗರ ಅವರಿಗೆ ಷೋಕಾಸ್ ನೋಟಿಸನ್ನೂ ನೀಡದೇ ಕಾನೂನನ್ನು ಮೀರಿ ಈ ಕ್ರಮ ಕೈಗೊಂಡಿದ್ದಾರೆ. ಇದರಿಂದ ಸಂಘದ ಸದಸ್ಯರಿಗೆ ತೀವ್ರ ಅಸಮಾಧಾನವಾಗಿದ್ದು, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.