ಎರಡು ದಶಕಗಳಿಂದ ನಿರಂತರವಾಗಿ ಸಾರ್ವಜನಿಕರಿಗೆ ಉಚಿತವಾಗಿ ನೀರು ಒದಗಿಸಿದ ಶ್ರೇಯ ಅವರದ್ದು. 24 ಎಕರೆ ಜಮೀನು ಹೊಂದಿರುವ ಯಲ್ಲಪ್ಪ, ಕಬ್ಬು ಮತ್ತಿತರ ಬೆಳೆ ಬೆಳೆಯುತ್ತಾರೆ. ಸುತ್ತಲಿನ ಯಲ್ಲಟ್ಟಿ, ಹನಗಂಡಿ, ಚಿಮ್ಮಡ, ಹೊಸೂರ ಗ್ರಾಮಗಳ ಜನರೂ ಬೇಸಿಗೆಯಲ್ಲಿ ಇಲ್ಲಿಂದಲೇ ನೀರು ಒಯ್ಯುತ್ತಾರೆ. ಅಗ್ನಿ ಶಾಮಕ ವಾಹನಗಳಿಗೂ ಇಲ್ಲಿಂದಲೇ ನೀರು ತುಂಬಿಸಲಾಗುತ್ತದೆ.